ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ ಏಕೆ: ಕಾಂಗ್ರೆಸ್

Update: 2023-08-20 09:48 GMT

ಬೆಂಗಳೂರು: ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ, ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ. ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ ಬಿ ಎಸ್ ಯಡಿಯೂರಪ್ಪ ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಸಮಾಧಾನಿತರ ನೋವು ಕೇಳಲು ನಳಿನ್ ಕುಮಾರ್ ಕಟೀಲ್ ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ. ರಾಜ್ಯದ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ, ತಿರಸ್ಕಾರ ಇರುವುದೇಕೆ? ಬಹುಶಃ ಅಮಿತ್ ಶಾ ಅವರಿಗೆ ಕರ್ನಾಟಕದ ಬಿಜೆಪಿ ಘಟಕವನ್ನು ವಿಸರ್ಜಿಸಿಬಿಡುವ ಚಿಂತನೆ ಇರಬಹುದೇನೋ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News