ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2023-11-26 12:20 GMT

ಉಡುಪಿ, ನ.26: ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಝಕಾತ್ ಸ್ವಿಕರಿಸಲು ಅರ್ಹರಾಗಿರುವ 2023/24 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಾಂಗ ಮಾಡು ತ್ತಿರುವ ಪ್ರಥಮ ಪಿಯುಸಿ ಹಾಗೂ ಪ್ರಥಮ ವರ್ಷದ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು , ತಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸ ಬೇಕು. ಅರ್ಜಿಯೊಂದಿಗೆ ಕಳೆದ ವಾರ್ಷಿಕ ಸಾಲಿನಲ್ಲಿ ಉತ್ತೀರ್ಣರಾದ ಅಂಕ ಪಟ್ಟಿಯ ನಕಲು ಪ್ರತಿಯನ್ನು ಲಗತೀಕರಿಸ ಬೇಕು. ಕೆನರಾ ಫೂಟ್ ವೇರ್ ,ಬಸ್ಸು ನಿಲ್ದಾಣ ಬ್ರಹ್ಮಾವರ(ಮೊ- 9731531966) ಅಥವಾ ಪ್ಲಸೆಂಟ್ ಫರ್ನಿಚರ್ ಮಾಲ್ ರೋಟರಿ ಭವನ ಹತ್ತಿರ ಬ್ರಹ್ಮಾವರ(ಮೊ-9448216862) ಈ ವಿಳಾಸಕ್ಕೆ ಡಿ.4ರೊಳಗೆ ಕಳುಹಿಸಿ ಕೊಡ ಬೇಕೆಂದು ಪ್ರಧಾನ ಕಾರ್ಯದರ್ಶಿ ಅಸ್ಲಾಂ ಹೈಕಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News