ಕಾರ್ಕಳ: ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

Update: 2024-09-23 09:13 GMT

ಕಾರ್ಕಳ: ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಮೀಯ್ಯಾರು ಗ್ರಾಮದ ಜೋಡುಕಟ್ಟೆ ಕೊಂಕಣ ಪ್ಲಾಝಾದಲ್ಲಿ ಜರುಗಿತು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ

ಕೆ.ಎಂ.ಖಲೀಲ್ ಸಭೆಯನ್ನು ಉದ್ಘಾಟಿಸಿದರು.

ಆನ್ಲೈನ್ ಸೇವೆಗಳನ್ನು ವಿನೂತನ ತಂತ್ರಜ್ಞಾನವನ್ನು ಯುನಿಗ್ಸ್ ಇದರ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಡುಪಿ ಮತ್ತು ಮಂಗಳೂರು ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ನೆರವೇರಿಸಿದರು. ಸಹಕಾರಿ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶೇಕ್ ಶಬ್ಬೀರ್ ವಹಿಸಿದ್ದರು.

ಸಭೆಯಲ್ಲಿ ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರಾದ ಉದಯಕುಮಾರ್ ಹೆಗಡೆ, ಸಂತೋಷ ಪೂಜಾರಿ, ರಮೇಶ್ ಶೆಟ್ಟಿ, ಸತೀಶ್ ಪೂಜಾರಿ ಶಕುಂತಲಾ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿರುಷಾ ಶೆಟ್ಟಿ, ನಗದು ಗುಮಾಸ್ತೆ ಜ್ಯೋತಿ, INBIಯ ನಿರ್ದೇಶಕ ರತ್ನಾಕರ್ ನಾಯಕ್ ಮತ್ತು ಅವರ ತಂಡದ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಹಿರಿಯ ಪತ್ರಕರ್ತ, ಕಾರ್ಕಳ ತಾಲೂಕು v4 ಮಾಧ್ಯಮದ ವರದಿಗಾರ ಕೆ.ಎಂ.ಖಲೀಲ್ ಹಾಗೂ ಉಭಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ಅವರನ್ನು ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News