ಕಾರವಾರ| ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ: ಓರ್ವ ನಾಪತ್ತೆ

Update: 2024-08-29 13:24 GMT

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ‌ಮುಳುಗಡೆಯಾಗಿ ಮೂವರ ಪೈಕಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಕುಮಟಾದ ಅಘನಾಶಿನಿ ನದಿಯ ಬೇಲೆಕಾನ್ ಬಳಿ ಇಂದು ಮಧ್ಯಹ್ನದ ಸುಮಾರಿಗೆ ನಡೆದಿದೆ.

ಯುವಕ ಮುಳುಗುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕುಮಟಾ ತಾಲೂಕಿನ ವಿನೋದ್​​ ಅಂಬಿಗ (37) ನಾಪತ್ತೆಯಾದ ಮೀನುಗಾರ. ಒಟ್ಟು ಮೂರು ಮಂದಿ ಸೇರಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ದೋಣಿ ಪಲ್ಟಿಯಾಗಿತ್ತು. ಈ ವೇಳೆ, ಇಬ್ಬರು ಮೀನುಗಾರರು ಈಜಿಕೊಂಡು ದಡ ಸೇರಿದ್ದು, ಓರ್ವ ಮಾತ್ರ ಅಲೆಗಳ ರಭಸಕ್ಕೆ ದಡಕ್ಕೆ ಬರಲಾಗದೆ ಕೊಚ್ಚಿಕೊಂಡಿ ಹೋಗಿ ದ್ದಾನೆ. ಈ ದೃಶ್ಯವನ್ನು ದಡದಲ್ಲಿದ್ದ ಕೆಲವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಬಗ್ಗೆ ಗೋಕರ್ಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News