ಯಾದಗಿರಿ | ಅಂಬೇಡ್ಕರ್ ಜಯಂತಿಯ ಭಿತ್ತಿ ಪತ್ರ ಬಿಡುಗಡೆ ಮಾಡಿದ ತಹಶೀಲ್ದಾರ್ ಹುಸೇನ್ಸಾಬ್

ಸುರಪುರ : ಏಪ್ರಿಲ್ 18 ರಂದು ಹಮ್ಮಿಕೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಭಿತ್ತಿ ಪತ್ರಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹುಸೇನಸಾಬ್ ಎ ಸರಕಾವಸ್, ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ ತಾತಾ, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಭಾಗವಹಿಸಿ ಭಿತ್ತಿ ಪತ್ರಗಳ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮ್ಯಾನೇಜರ್ ಯಲ್ಲಪ್ಪ ನಗರಸಭೆಯ AEE ಶಾಂತಪ್ಪ , PWD ಯ ಉಮೇಶ್ ಕುದರಿ ಹಾಗೂ ನಗರಸಭೆಯ ಮಾಜಿ ಸದ್ಯಸರು ವೆಂಕಟೇಶ್ ಹೊಸಮನಿ, ನಗರಸಭೆಯ AEE ಶಿವುಕುಮಾರ್ ಕಟ್ಟಿಮನಿ ಹಾಗೂ 134ನೇ ಜಯಂತೋತ್ಸವ ಸಭೆಯ ಗೌರವಾಧ್ಯಕ್ಷ ರಾಜು ಕಟ್ಟಿಮನಿ, ಅಧ್ಯಕ್ಷರಾದ ವೈಜನಾಥ ಹೊಸಮನಿ, ಉಪಾಧ್ಯಕ್ಷರಾದ ಗಿರೀಶ್ ಶಾಖನವರು, ಆಕಾಶ್ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಲಚುಮಪ್ಪ ಸುರಪುರಕರ್,ಸಹ ಕಾದರ್ಶಿ ನಾಗಲಿಂಗ ಹುಲಿಕಾರ್, ಖಜಂಚಿ ಮನೋಹರ್ ಜೀವಣಗಿ ಝ0ಡದಕೇರಾ ಹಿರಿಯರಾದ ಚಂದಪ್ಪ ಪಂಚುಮ್,ಮಂಜುನಾಥ ಹೊಸಮನಿ, ಸುಮಿತ್ ಸುರಪುರಕರ್,ರಮೇಶ್ ಅರಕೇರಿ, ಮಹದೇವಪ್ಪ ಸತ್ಯಂಪೇಟ, ಮಾನಪ್ಪ ಗೋಡ್ರಾಳ್, ಆನಂದ್ ಕಟ್ಟಿಮನಿ ಗೋವರ್ಧನ್ ತೆಲ್ಕರ್, ಗೋಪಾಲಕೃಷ್ಣ ಹುಲಿಕಾರ್, ಜೀವನ್ ಕುಮಾರ್ ಜೀವಣಗಿ,ಮಾಂತೇಶ್ ಹುಲಿಕಾರ್ ಬೆನಕಪ್ಪ ಸುರಪುರಕರ್, ರೋಹಿತ್ ಕಾಂಬಳೆ, ಮಂಜುನಾಥ್ ಸುರಪುರಕರ್, ನಿಂಗರಾಜ್ ಮಂಗ್ಯಾಳ, ಮೋಹನ್ ಚಲವಾದಿ, ಶಿವಕುಮಾರ್ ಮುಷ್ಟಹಳ್ಳಿ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯ ಯುವಕರು ಇದ್ದರು.