ಒಡಿಶಾದ ಪ್ರವಾಹ ಪೀಡಿತ ಗ್ರಾಮದ 24 ಜನರ ರಕ್ಷಣೆ

Update: 2024-10-27 14:17 GMT

PC : PTI

ಭುವನೇಶ್ವರ : ಡಾನಾ ಚಂಡಮಾರುತದಿಂದ ಒಡಿಶಾದಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ. ಈ ನಡುವೆ ಭದ್ರಕ್ ಜಿಲ್ಲೆಯ ಪ್ರವಾಹಪೀಡಿತ ಗ್ರಾಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 24 ಜನರನ್ನು ರಕ್ಷಿಸಲಾಗಿದೆ.

ತಿಹಿದಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜಲಾವೃತಗೊಂಡಿದ್ದ ತಾಲಗೋಪಾಬಿಂಧಾ ಗ್ರಾಮದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 24 ಜನರು ಸಿಕ್ಕಿಹಾಕಿಕೊಂಡಿದ್ದರು. ಶನಿವಾರ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾಪಡೆ ಸಿಬ್ಬಂದಿಗಳು ಅವರನ್ನು ಮೋಟರ್‌ಬೋಟ್‌ಗಳ ಮೂಲಕ ರಕ್ಷಿಸಿ ಪರಿಹಾರ ಶಿಬಿರಕ್ಕೆ ಸಾಗಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಸಾಲಂದಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದರಿಂದ ಗ್ರಾಮದಲ್ಲಿ ಪ್ರವಾಹ ತಲೆದೋರಿತ್ತು. ಡಾನಾ ಚಂಡಮಾರುತ ಶುಕ್ರವಾರ ಬೆಳಗಿನ ಜಾವ ಪೂರ್ವ ಕರಾವಳಿಗೆ ಅಪ್ಪಳಿಸಿದ್ದು,ಭಾರೀ ಮಳೆ ಮತ್ತು ಗಾಳಿಗೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News