ಕಲ್ಲಿದ್ದಲು ಗಣಿಯಲ್ಲಿ ಬೆಂಕಿ; 13 ಸಾವು

Update: 2018-12-21 17:39 GMT

ಪ್ರೇಗ್ (ಝೆಕ್ ರಿಪಬ್ಲಿಕ್), ಡಿ. 21: ಪೂರ್ವ ಝೆಕ್ ರಿಪಬ್ಲಿಕ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಸಂಭವಿಸಿದ ಬೆಂಕಿ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

ಕರ್ವಿನ ನಗರದ ಸಿಎಸ್‌ಎಂ ಗಣಿಯಲ್ಲಿ 880 ಮೀಟರ್ ಆಳದಲ್ಲಿ ಗುರುವಾರ ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ.

‘‘ಮೃತರದಲ್ಲಿ 12 ಪೋಲ್ಯಾಂಡ್ ಪ್ರಜೆಗಳು ಮತ್ತು ಓರ್ವ ಝೆಕ್ ಪ್ರಜೆ’’ ಎಂದು ಗಣಿ ಕಂಪೆನಿಯ ವಕ್ತಾರರೋರ್ವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಝೆಕ್ ಪ್ರಧಾನಿ ಮ್ಯಾಥ್ಯೂಸ್ ಮೊರಾವಿಕಿ ಶುಕ್ರವಾರ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News