ಅಭಿನಂದನ್ ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಪಾಕ್ ಕೋರ್ಟ್
Update: 2019-03-01 16:35 GMT
ಇಸ್ಲಾಮಾಬಾದ್,ಮಾ.1: ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವುದನ್ನು ತಡೆಯುವಂತೆ ಪಕ್ ಪ್ರಜೆಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿತು.
ಭಾರತೀಯ ಪೈಲಟ್ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಲು ದೇಶದ ವಾಯುಪ್ರದೇಶವನ್ನು ಉಲ್ಲಂಘಿದ್ದರು. ಹೀಗಾಗಿ ಅವರು ಪಾಕಿಸ್ತಾನದ ವಿರುದ್ಧ ಅಪರಾಧವನ್ನೆಸಗಿದ್ದಾರೆ ಮತ್ತು ಇಲ್ಲಿಯೇ ವಿಚಾರಣೆಯನ್ನು ಎದುರಿಸಬೇಕು ಎಂದು ಅರ್ಜಿಯಲ್ಲಿ ವಾದಿಸಿದ್ದ ಪಾಕ್ ಪ್ರಜೆ,ಪ್ರಧಾನಿ ಇಮ್ರಾನ್ ಖಾನ್ ಅವರ ಸರಕಾರವು ಭಾರತೀಯ ಪೈಲಟ್ನ್ನು ಹಸ್ತಾಂತರಿಸುವುದಕ್ಕೆ ತಡೆಯಾಜ್ಞೆಯನ್ನು ನೀಡುವಂತೆ ಕೋರಿದ್ದ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಅತರ್ ಮಿನ್ಹಲ್ಲಾ ಅವರು ಅದನ್ನು ವಜಾಗೊಳಿಸಿದರು.