ಇಂಡೋನೇಶ್ಯ: ಚಿನ್ನದ ಗಣಿಯೊಳಗೆ ಇನ್ನೂ 100 ಮಂದಿ

Update: 2019-03-04 17:36 GMT

ಜಕಾರ್ತ (ಇಂಡೋನೇಶ್ಯ), ಮಾ. 4: ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಕುಸಿದಿರುವ ಅಕ್ರಮ ಚಿನ್ನದ ಗಣಿಯೊಂದರಲ್ಲಿ ಇನ್ನೂ 100 ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಇಂಡೋನೇಶ್ಯದ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಈವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 19 ಮಂದಿಯನ್ನು ಜೀವಂತವಾಗಿ ಹೊರದೆಗೆಯಲಾಗಿದೆ. ಅದೇ ವೇಳೆ, ಒಂಬತ್ತು ಮೃತದೇಹಗಳನ್ನೂ ಮೇಲಕ್ಕೆ ಎಳೆಯಲಾಗಿದೆ.

 ಕಳೆದ ಮಂಗಳವಾರ ಸಂಭವಿಸಿದ ಭೂಕುಸಿತದ ಬಳಿಕ ಪರವಾನಿಗೆಯಿಲ್ಲದ ಚಿನ್ನದ ಗಣಿ ಕುಸಿದಿದೆ. ಕಡಿದಾದ ಭೂಪ್ರದೇಶ, ಅಸ್ಥಿರ ಮಣ್ಣು ಮತ್ತು ಅಪಾಯಕಾರಿಯೆಂಬಷ್ಟು ಕಿರಿದಾದ ಗಣಿಯೊಳಗಿನ ಮಾರ್ಗದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News