ನೂತನ ಭಾರತ ಸರಕಾರದ ಜೊತೆ ಮಾತುಕತೆಗೆ ಪಾಕ್ ಸಿದ್ಧ: ಶಾ ಮೆಹಮೂದ್ ಖುರೈಷಿ
Update: 2019-05-26 17:44 GMT
ಇಸ್ಲಾಮಾಬಾದ್,ಮೇ 26: ಕಾಶ್ಮೀರ ಸೇರಿದಂತೆ ಉಭಯದೇಶಗಳ ನಡುವೆ ಇತ್ಯರ್ಥಗೊಳ್ಳದೆ ಇರುವ ಎಲ್ಲಾ ವಿವಾದಗಳನ್ನು ಬಗೆಹರಿಸುವುದಕ್ಕಾಗಿ ಭಾರತದ ನೂತನ ಸರಕಾರದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನವು ಸಿದ್ಧವಿದೆಯೆಂದು, ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೈಷಿ ಘೋಷಿಸಿದ್ದಾರೆ.
ಮುಲ್ತಾನ್ನಲ್ಲಿ ಶನಿವಾರ ನಡೆದ ಇಫ್ತಾರ್ ಭೋಜನಕೂಟದಲ್ಲಿ ಮಾತನಾಡುತ್ತಿದ್ಜ ಅವರು ಪ್ರದೇಶದಲ್ಲಿ ಶಾಂತಿ ಹಾಗೂ ಸಮೃದ್ಧಿ ಸ್ಥಾಪನೆಗಾಗಿ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ನಡುವೆ ಇರುವ ವಿವಾದಗಳನ್ನು ಬಗೆಹರಿಸಲು ಮಾತುಕತೆಯ ಮೇಜಿಗೆ ಬರಬೇಕೆಂದು ಖುರೈಷಿ ಕರೆ ನೀಡಿದ್ದಾರೆಂದು ‘ರೇಡಿಯೊ ಪಾಕಿಸ್ತಾನ್’ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ ಎರಡು ದಿನಗಳ ಬಳಿಕ ಖುರೈಷಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.