ಮೈಸೂರು ಪ್ರಕರಣಕ್ಕೆ ಅನಗತ್ಯ ಪ್ರಚಾರ ಬೇಡ : ಎಚ್.ಡಿ.ಕುಮಾರಸ್ವಾಮಿ

Update: 2025-02-15 16:15 IST
ಮೈಸೂರು ಪ್ರಕರಣಕ್ಕೆ ಅನಗತ್ಯ ಪ್ರಚಾರ ಬೇಡ : ಎಚ್.ಡಿ.ಕುಮಾರಸ್ವಾಮಿ
  • whatsapp icon

ಹಾಸನ : ಮೈಸೂರು ಗಲಭೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದರೆ ಮೈತ್ರಿ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮೈಸೂರು ಪ್ರಕರಣಕ್ಕೆ ಅನಗತ್ಯ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದ್ದಾರೆ.

ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಪ್ರಮುಖ ಸಮಸ್ಯೆಗಳಿದ್ದು, ಇಂತಹ ಪ್ರಕರಣಗಳನ್ನು ಕೇವಲ ರಾಜಕಿಯ ಲಾಭಕ್ಕೆ ಬಳಸಬಾರದು ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಒಂದು ಸಮಾಜದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕಾರಣದಿಂದ ಮತ್ತೊಂದು ಸಮಾಜದವರು ಸರಕಾರಿ ವಾಹನಗಳಿಗೆ ಕಲ್ಲು ತೂರಾಟ ನಡೆಸಲು ಮುಂದಾದರು. ಈ ಘಟನೆ ರಾಜ್ಯದಲ್ಲಿ ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಘಟನೆಗೆ ರಾಜಕೀಯ ಬಣ್ಣ ನೀಡಲಾಗಿದೆ. ಆದರೆ, ನಮ್ಮ ಗಮನ ರಾಜ್ಯದ ತೀರಾ ಗಂಭೀರ ಸಮಸ್ಯೆಗಳ ಕಡೆಗೆ ಇರಬೇಕು ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ತೆರಿಗೆ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರಕಾರ 1,89,000 ಕೋಟಿ ರೂಪಾಯಿಗಳ ಸಂಗ್ರಹ ನಿರೀಕ್ಷೆ ಇಟ್ಟಿತ್ತು. ಆದರೆ, ಇನ್ನೂ 15,000 ಕೋಟಿ ರೂಪಾಯಿ ಕೊರತೆ ಎದುರಿಸುವ ಸಾಧ್ಯತೆ ಇದೆ. ಇದನ್ನು ತುಂಬಿಸುವ ಪ್ರಯತ್ನವಾಗಿ ಸಿಎಲ್-2, ಸಿಎಲ್‌-7 ಮತ್ತು ಸಿಲ್-9 ಅಡಿಯಲ್ಲಿ 500 ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ಸರಕಾರ ತಯಾರಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News