ಬೇಸಿಗೆ ಅವಧಿಯಲ್ಲಿ ವಿಶೇಷ ರೈಲು ಸೇವೆ ಆರಂಭಿಸಿದ ನೈಋತ್ಯ ರೈಲ್ವೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ರೈಲ್ವೆ ಮಂಡಳಿಯು ಬೇಸಿಗೆ ಅವಧಿಯಲ್ಲಿ ವಿಶೇಷ ರೈಲುಗಳ ಓಡಾಟಕ್ಕೆ ಅನುಮೋದನೆ ನೀಡಲಾಗಿದ್ದು, ಮೈಸೂರು-ಅಜ್ಮೀರ್ ಎಕ್ಸ್ ಪ್ರೆಸ್ ಒಟ್ಟು 11 ಟ್ರಿಪ್, ಎಸ್ಎಂವಿಟಿ-ಭಗತ್ ಕಿ ಕೋಠಿ ರೈಲುಗಳು ಒಟ್ಟು 8 ಟ್ರಿಪ್ ಸಂಚರಿಸಲಿವೆ.
ಮೈಸೂರಿನಿಂದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಶನಿವಾರ ಮತ್ತು ಜೂ.7, ಜೂ.14ರಂದು ಬೆಳಿಗ್ಗೆ 8ಕ್ಕೆ ಹೊರಟು, ಸೋಮವಾರ ಬೆಳಿಗ್ಗೆ 6:55ಕ್ಕೆ ಅಜ್ಮೀರ್ ತಲುಪುತ್ತದೆ. ಅಜ್ಮೀರ್ನಿಂದ ಎಪ್ರಿಲ್ ಮತ್ತು ಮೇ ತಿಂಗಳ ಪ್ರತಿ ಸೋಮವಾರ ಮತ್ತು ಜೂ.2, ಜೂ.9 ಮತ್ತು ಜೂ.16ರಂದು ಸಂಜೆ 6:50ಕ್ಕೆ ಹೊರಟು, ಬುಧವಾರ ಸಂಜೆ 5:30ಕ್ಕೆ ಮೈಸೂರು ತಲುಪುತ್ತದೆ.
ಈ ರೈಲುಗಳು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ಲಾಂ, ಮಂದಸೋರ್, ನಿಮಾಚ್, ಚಿತ್ತೌರ್ಗಢ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ರೈಲು 14 ಎಸಿ 3 ಟೈರ್ ಬೋಗಿಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.
ಎಸ್ಎಂವಿಟಿ-ಭಗತ್ ಕಿ ಕೋಠಿ: ಎಸ್ಎಂಂವಿಟಿ ಬೆಂಗಳೂರಿನಿಂದ ಎ.5, 12, 19, 26 ಹಾಗೂ ಮೇ 3, 10, 17, 24ರಂದು ಸಂಜೆ 7 ಗಂಟೆಗೆ ಹೊರಟು, ಸೋಮವಾರ ಮಧ್ಯಾಹ್ನ 1:40 ಕ್ಕೆ ಭಗತ್ ಕಿ ಕೋಠಿಯನ್ನು ತಲುಪಲಿದೆ. ಭಗತ್ ಕಿ ಕೋಠಿಯಿಂದ ಎ.7, 14, 21, 28 ಹಾಗೂ ಮೇ 5, 12, 19, 26ರಂದು ರಾತ್ರಿ 11:10ಕ್ಕೆ ಹೊರಟು, ಬುಧವಾರ ಮಧ್ಯಾಹ್ನ 3:30ಕ್ಕೆ ಎಸ್ಎಂವಿಟಿ ರೈಲು ನಿಲ್ದಾಣವನ್ನು ರೈಲುಗಳು ತಲುಪಲಿವೆ.
ಈ ರೈಲುಗಳು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಸಬರಮತಿ, ಮಹೇಸಾನಾ, ಭಿಲ್ಡಿ, ರಾಣಿವಾರ, ಮಾರ್ವಾರ್, ಬಿನ್ಮಲ್ ಮೊದ್ರನ್, ಜಲೋರ್, ಮೊಕಲ್ಸರ್, ಸಂಧಾರಿ ಜಂಕ್ಷನ್, ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ರೈಲು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 19 ಎಸಿ ಕೋಚ್ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್ಗಳು ಒಳಗೊಂಡಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ರೈಲ್ವೆ ವೆಬ್ಸೈಟ್ www.enquiry.indianrail.gov.in ಅನ್ನು ಸಂಪರ್ಕಿಸಬಹುದು.