ಕಣ್ಣೂರ್ ಅಲ್ ಬಿರ್ರ್‌ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ

Update: 2024-10-13 14:36 GMT

ಮಂಗಳೂರು: ಅಡ್ಯಾರ್ ಕಣ್ಣೂರ್ ಅಲ್ ಬಿರ್ರ್‌ ಫ್ರಿ ಸ್ಕೂಲ್ ಇದರ ವತಿಯಿಂದ ಅ.10 ರಂದು ವಿದ್ಯಾರ್ಥಿಗಳಿಗೆ ವಿವಿಧ ಇಸ್ಲಾಮಿಕ್ ಸಾಹಿತ್ಯ, ಗಾಯನ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.

ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಹಾಜಿ ಅಬ್ದುಲ್ ಮಜೀದ್ ಸಿತಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕರಾದ ರಿಯಾಝ್ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಧ್ಯಾಪಕರಾದ ಇರ್ಫಾನ್ ಅಸ್ಲಮಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಸಂಶಾದ್ ಸ್ವಾಗತಿಸಿ ಇಸ್ಮಾಯೀಲ್ ಯಮಾನಿ ದುಅ ನೆರವೇರಿಸಿದರು. ನಂತರ ಅಲ್ ಬಿರ್ರ್‌ ಫ್ರೀ ಸ್ಕೂಲ್ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಅಫ್ರಿದಾ ಕಾರ್ಯಕ್ರಮ ನಿರೂಪಿಸಿ, ಝೈನಾ ವಂದಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News