ದಿಲ್ಲಿ: ತಲೆಗೆ ಗುಂಡು ಹಾರಿಸಿಕೊಂಡು ಎಎಸ್ಐ ಆತ್ಮಹತ್ಯೆ

Update: 2024-01-13 16:06 GMT

ಹೊಸದಿಲ್ಲಿ : ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಸುಕಿನಲ್ಲಿ ದಕ್ಷಿಣ ದಿಲ್ಲಿಯ ಮುಬಾರಕ್ಪುರ ಪ್ರದೇಶದಲ್ಲಿಯ ಪೊಲೀಸ್ ಚೌಕಿಯಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಎಸ್ಐ ರಾಮಾವತಾರ ಸಿಂಗ್ ಮತ್ತು ಸಬ್ ಇನ್ಸ್ಪೆಕ್ಟರ್ ಪ್ರೇಮ್ ಸಿಂಗ್ ಅವರನ್ನು ಬಿ.ಪಿ. ಮಾರ್ಗದಲ್ಲಿಯ ಪೊಲೀಸ್ ಚೌಕಿಯಲ್ಲಿ ರಾತ್ರಿ ಕರ್ತವ್ಯಕ್ಕೆ ನಿಯೋಜಿಲಾಗಿತ್ತು. ರಾಮಾವತಾರ ಸಿಂಗ್ ನಸುಕಿನ ಮೂರು ಗಂಟೆಯ ಸುಮಾರಿಗೆ ತನಗೆ ಹತ್ತು ನಿಮಿಷಗಳ ವಿಶ್ರಾಂತಿ ಬೇಕು ಎಂದು ಪ್ರೇಮ್ ಸಿಂಗ್ ಗೆ ತಿಳಿಸಿ ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಕುಳಿತುಕೊಳ್ಳಲು ತೆರಳಿದ್ದರು. ಕೆಲವು ಸಮಯದ ಬಳಿಕ ಪ್ರೇಮ್ ಸಿಂಗ್ ಕಾರಿನ ಬಳಿ ತೆರಳಿದಾಗ ರಾಮಾವತಾರ ಮೃತಪಟ್ಟಿದ್ದು, ಅವರ ತಲೆಯಲ್ಲಿ ಗುಂಡಿನ ಗಾಯವಿತ್ತು. ಅವರ ಸರ್ವಿಸ್ ರಿವಾಲ್ವರ್ ಸಮೀಪದಲ್ಲಿ ಬಿದ್ದಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಹರ್ಯಾಣದ ಮಹೇಂದ್ರಗಡ ಮೂಲದ ರಾಮಾವತಾರ ಸಿಂಗ್ 1993 ರಲ್ಲಿ ದಿಲ್ಲಿ ಪೊಲೀಸ್ ಪಡೆಯನ್ನು ಸೇರಿದ್ದರು. ಅವರ ನಿಧನದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅವರ ಈ ಅತಿರೇಕದ ಕ್ರಮದ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ತನಿಖೆಯನ್ನು ನಡೆಸಲಾಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News