ನಾಳೆ ಎಸೆಸೆಲ್ಸಿ ಪರೀಕ್ಷೆ | ನಿಷ್ಪಕ್ಷಪಾತ ಪರೀಕ್ಷಾ ಪ್ರಕ್ರಿಯೆಗೆ ಆದ್ಯತೆ; ಬಿಇಒ ಮಾರುತಿ ಹುಜರಾತಿ

ಕಲಬುರಗಿ: ಎಸೆಸೆಲ್ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸೇಡಂ ತಾಲ್ಲೂಕಿನಲ್ಲಿ ಎಸೆಸೆಲ್ಸಿ ಬೋರ್ಡ್ ಪರೀಕ್ಷೆ ಯಶಸ್ವಿ ನಿರ್ವಹಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಿಸ್ತು, ಸುರಕ್ಷತೆ ಹಾಗೂ ನಿಷ್ಪಕ್ಷಪಾತ ಪರೀಕ್ಷಾ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ ಎಂದು ಕ್ಷೆತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ತಿಳಿಸಿದ್ದಾರೆ,
ಪರೀಕ್ಷಾ ಕೇಂದ್ರಗಳಲ್ಲಿ ಪಾಲಕರು ಪ್ರವೇಶಿಸದಂತೆ, ಮಕ್ಕಳನ್ನು ಕೇಂದ್ರದ ಹೊರಗಡೆ ಬಿಟ್ಟು ಹೋಗುವಂತೆ ಮನವಿ ಮಾಡಲಾಗಿದೆ. ಶಾಂತಿಸ್ಥಿತಿ ಕಾಪಾಡಲು ಸಹಕರಿಸುವಂತೆ ಪಾಲಕರಿಗೆ ಮನವಿ ಮಾಡಲಾಗಿದೆ ಎಂದರು.
ಸೇಡಂ ಪಟ್ಟಣದಲ್ಲಿ ಮಾತ್ರಛಾಯ ಕಾಲೇಜು, ಜುನೇರ ಕಾಲೆಜು ಸರ್ಕಾರಿ ಶಾಲೆ ಸೇರಿ ಒಟ್ಟು (3) ಪರೀಕ್ಷೆಗಳು, ಮುಧೋಳ ದಲ್ಲಿ (3) ಪರೀಕ್ಷೆ ಕೇಂದ್ರಗಳು ಹಾಗೂ ಕೋಡ್ಲಾ ಗ್ರಾಮದಲ್ಲಿ (1) ಮತು ಆಡಕಿ ಯಲ್ಲಿ (1) ಪರೀಕ್ಷೆ ಕೇಂದ್ರಗಳು ಅಳವಡಿಸಲಾಗಿದೆ ಎಂದರು.
ಪರೀಕ್ಷೆ ಕೇಂದ್ರಗಳಲ್ಲಿ ವಿಧ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪರೀಕ್ಷೆ ಕೇಂದ್ರದ ಕೊಠಡಿಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗುವುದು ಎಂದು ಹೇಳಿದ್ದಾರೆ.